Wednesday, December 21, 2011

Car

ಕುಂಬಾರನಿಗೆ ಒಂದು ವರುಷ
ದೊಣ್ಣೆಗೆ ಒಂದು ನಿಮಿಷ
Car ಎಂಬೋದು ಒಂದು ಆಮಿಷ :(

Thursday, July 15, 2010

Threshold, of sorts

It's amazing how situation changes our thinking and actions.


Not so very long ago, the duration, before which I would lose sanity, lasted a few hours.. Then came a period when the duration stretched to almost a day... The worst part was not just the wait, but also the inability to do anything but to wait!
The solution that I found out was to type... And did I type! Insanity shone, breaking the hundreds barrier... Not once or twice but eight times!


Now it's all different.. The wait is still there but for a few minutes, if not seconds. And I found a healthier solution : to walk/run. 


Well, I guess I have crossed the threshold while typing this blog, so I got to walk now....


bis dann..

Tuesday, April 13, 2010

ಸೋಪಾನಮಾರ್ಗ



ಬಾಳ ವಿಕೀರ್ಣ ಸೋಪಾನವ
ಎಡವಿ ಮೇಲೇರುವ ಸಮಯದಲಿ |
ದಿಟ್ಟಿಸಿದೆನು ಅಡಿಪಾಯವ
ಸುಪ್ತ ಸಮಾಜದ ಪರಿಧಿಯಲಿ ||

ಕಂಡೆನು ನೋವ ಗುರುತುಗಳ
ಹಲವರು ತೆವಳಿಹ ಪಥಗಳಲಿ |
ತಿಳಿದೂ ಎನ್ನಯ ತಾಮಸವ
ನಡೆದೆನು ಗೊಡ್ಡು ದಾರಿಯಲಿ ||

ಹತ್ತುತಿರಲು ಒಂದು ದಿನ
ಆಲಿಸಿ ದನಿ ಪಿಸು-ಮಾತಿನಲಿ |
ದೃಷ್ಟಿಸಿದೆ ನಾನಾಗಸವ
ಮಿಡಿದ ಕಂಬನಿಯ ಒರಸುತಲಿ ||

ಅಚಲ ಗಗನದ ವೈಶಾಲ್ಯವ 
ಕಂಡು ನಾ ಬೆರಗಾದೆನು |
ಪ್ರತ್ಯೇಕ ಮಾನವನ ದುಃಖದ
ನಿಕೃಷ್ಟತನವ ಅರಿತೆನು ||

ಜೀವನದ ಸೋಪಾನದಲಿ
ಪಯಣವೇ ಪ್ರಾಮುಖ್ಯ |
ಇಡುವ ಪ್ರತಿ ಹೆಜ್ಜೆ ನನ್ನದೇ
ಎನ್ನ ಭವಿಷ್ಯ ಆಲೇಖ್ಯ ||

Friday, February 26, 2010

In vain

anticipation......
trepidation.......
consolation.......

All in vain.... 

Because when it hits you, you won't even know.... 

Saturday, January 16, 2010

ಗೊಧೂಳಿಯ ವೇಳೆ --- ಶ್ರಮಣನಿಗೋ-ವೈದಿಕನಿಗೋ?



ಬಾನಂಚಲಿ ಸಾಗಿಹನು ಕೆಂಪು ರವಿ-ತೇಜ |
ಸುಂದರ ಚಿತ್ತಾರವದು ಬಣ್ಣದಾ ಕ್ಷಿತಿಜ ||
ಹಕ್ಕಿಗಳು ವಲಸೆಯಲಿ ಅರಸುತಿಹವು ಉಟಜ |
ಮುಸ್ಸಂಜೆಯ ರಂಗಲ್ಲಿ ಪರಿಸರದ ಧ್ವಜ ||

ಈ ಮಧುರ ದೃಶ್ಯವು ತೋರಿಹುದು ಕ್ಷಣಿಕ |
ಬೆಳಗುತಿದ್ದ ಆಗಸಕೆ ಬಿದ್ದಿದೇ ಯವನಿಕ ||
ಸೌಂದರ್ಯದ ಮಾಯೆಯ ಸೃಷ್ಟಿಸಿ ತನ್ಮೂಲಕ |
ಸೆಳೆದಿಹನು ಚೈತನ್ಯವ ದಿವಾಕರನು ಆವಕ ||

ಮಾಸುತಿಹ ಪರಿಧಿಯಲಿ ಮಂಕಾಗಿದೆ ಕಾಂತಿ |
ಝೇಂಕರಿಸಿಹ ದುಂಬಿಯಲಿ ಕುದುರುತಿದೆ ಕ್ಲಾಂತಿ ||
ಆಯತದ ಛಾಯೆಯಲಿ ಮೂಡುತಿದೆ ಸಂಭ್ರಾಂತಿ |
ತಾಮಸದ ಮುಸುಕಿನಲಿ ಅಳಿದಿದೆ ಮನಶಾಂತಿ ||

ಮೂಡುವನು ಆಗಸದಿ ಹುಣ್ಣಿಮೆಯ ಚಂದಿರ |
ಕತ್ತಲಿನ ಸಾಗರದಿ ಬೆಳದಿಂಗಳ ಭೂಶಿರ ||
ದುಗುಡದ ಚೀತ್ಕಾರದಿ ಶಮನದ ಉದ್ಗಾರ |
ಶಾಂತಿಯಲಿ ಮಲಗಲಿದೆ ಮನಸಿನಾ ಸರೋವರ ||

ಶಶಿಯ ಆಗಮನವು ನೆಮ್ಮದಿಯ ತರಲಿರಲು |
ಸೂರ್ಯನ ಅಗಲಿಕೆಗೆ ಚಿಂತೆಯೇತಕೆ?
ಯಶಸ್ಸಿನ ಹಾದಿಯು ಜೀವನದ ಮುಂದಿರಲು |
ಅಪಜಯದ ಚಿಹ್ನೆಗೆ ಅಳುಕಲೇತಕೆ?

Photo: Courtesy Indira

Sunday, December 20, 2009

ಪೊದೆ



ಜೀವನದ ಬಿರುಗಾಳಿಯಲಿ; ಸಿಲುಕಿರಲು ಕೆಲವೊಮ್ಮೆ |
ಓಡುವೆನು ಕಾಲ್ದಾರಿಯಲಿ; ಎಡವಿರಲು ಇನ್ನೊಮ್ಮೆ |
ಅಪ್ಪುವೆನು ನಾ ಎನ್ನನೇ; ರಕ್ಷಿಸಲು ಮತ್ತೊಮ್ಮೆ ||

ನಾಜೂಕು - ಎನ್ನ ಮನವು; ಕ್ಷೇಮಜಾಗವ ಅರಸಿಹೆನು |
ಆಗುಂತಕ - ನನ್ನ ಮನೆಯು; ಮನದುಗುಡದಿ ಅಡಗಿಹೆನು |
ಆತ್ಮನಂಬಿಕೆ - ಒಂದು ಪೊದೆಯು; ಸದ್ಆಶ್ರಯವ ಬಯಸಿಹೆನು ||

ಅನುಭವದಿಂ ತುಂಬಿವೆ; ಪೊದೆಯಲ್ಲಿಹ ಎಲೆಗಳು |
ಶ್ರೀಗಂಧವ ಬೀರುತಿವೆ; ಆತ್ಮಸ್ಥೈರ್ಯದ ಹೂಗಳು |
ಸನ್ಮಾರ್ಗವ ತೋರುತಿಹೆ; ಸಂಸ್ಕೃತಿಯ ಕಾಂಡಗಳು ||

ಬಳ್ಳಿಯನು ಕಟ್ಟಿದ್ದೆನು; ಬೆಳವಣಿಗೆಯ ನಿಲ್ಲಿಸಲು |
ಕಾಂಡಗಳ ಮುರಿದಿದ್ದೆನು; ಅದರ ಹುಟ್ಟಡಗಿಸಲು |
ಬೇರ ಕೀಳಲು ಮರೆತಿದ್ದೆನು; ಅದೇ ನನ್ನ ಚಿಗುರಿಸಲು ||

ಬಿರುಗಾಳಿಯ ಆರ್ಭಟಕೆ; ಎಲ್ಲವೂ ಸಮಗೊಳ್ಳಲು |
ಕಾಪಾಡಿಹುದು ಪೊದೆಯು; ಶರಣಾಗಿ ನಾ ಬರಲು |
ಬೀರಿಹುದು ಜ್ಞಾನ-ತಳಿರು; ಹೊಸ ತೋರಣವ ಕಟ್ಟಿರಲು ||

Saturday, December 12, 2009

ನಾಂದಿ



ಶಶಿಯಿಲ್ಲದ ಆಗಸದಿ
ಕಾರ್ಮೋಡವು ಒಗ್ಗೂಡಲು |
ಬಿರುಗಾಳಿಯ ಆರ್ಭಟದಿ
ಬಹುತೆರೆಗಳು ಮೇಲೇರಲು |
ಅಪ್ಪಳಿಸಿತು ಉದ್ರೇಕದಿ
ಅವಳ ನೋವ ಅಲೆಗಳು ||


ಅರಸಿಹಳೊ೦ದು ಆಶ್ರಯ
ದೂರದಡದಿ ಕುಳಿತಿರಲು |
ಜೀವನದ ಅನಿಶ್ಚಯ
ಮನಸೆಲ್ಲವ ಕಾಡಿರಲು |
ಭಾವನೆಗಳ ಅಭಿನಯ
ತನ್ನಾತ್ಮವ ಕೊಂದಿರಲು ||


ಆಶಾಛವಿಯ ಕಿರಣಗಳು
ತಾಮಸವ ಕಳೆದಿರಲು |
ಭರವಸೆಯ ತಂಗಾಳಿಯು
ನೆಮ್ಮದಿಯ ತಂದಿರಲು |
ಹಳೆ ದುಃಖವ ಮರೆತಿಹಳು
ಸಬಲೆಯಾಗಿ ನಗುತಿರಲು ||

Thursday, December 10, 2009

Question

The problem is known;
known is the solution.
Why is it that I frown,
to battle the situation?

Shy away from thee;
would sure yield salvation.
Should I risk to see,
the play with emotion?

To see one evolve;
is the supreme ambition.
Should I just dissolve,
in the expanse of the creation?

Monday, December 7, 2009

ಕಲ್ಮಶ

ಕಲ್ಮಶದೊಳ್ ಹುಟ್ಟಿದರೂ ಕಮಲ
ಹೊಂದಿಪುದು ಶುಭ್ರತೆಯ ಅಮಲ...
ನಿನ್ನಲ್ಲಿಯ ಕಳಂಕಗಳ ತಳಮಳ
ಸೃಜಿಸುವುದು ಪ್ರೀತಿ-ವಿಶ್ವಾಸದ ಯಮಳ...

Wednesday, December 2, 2009

ಸ್ಫೂರ್ತಿ---ಕಾಣಿಕೆ

ನಾನಾಗಿದ್ದೆ ದುರ್ಬಲ ಚೀತ್ಕಾರ
ಧ್ವನಿಯಾಗಿ ಮಾರ್ಪಡಿಸಿದುದು ನೀನೆ....
ನನ್ನಿಂದಲೇ ಆಗಿದ್ದೆ ನಾ ದೂರ
ಆತ್ಮಸಂದರ್ಶನ ಮಾಡಿಸಿದುದು ನೀನೆ....
ಬಡವನಿಗೆ ಸಿಕ್ಕಿಹುದು ರಾಜಸತ್ಕಾರ
ಅಮೂಲ್ಯರತ್ನವ ಒದಗಿಸಿದುದು ನೀನೆ....

Friday, November 27, 2009

ಪ್ರೀತಿಯ ದೋಣಿ


ದೋಣಿಯೊಂದ ನಾ ನಿರ್ಮಿಸುವೆ
ಸ್ತರಿಸಿ ಪ್ರೀತಿಯ ಹಾಳೆಯನು....
ತಾರೆಗಳಿಂದ ಆದ ಸಜ್ಜಿಸುವೆ
ಬಣ್ಣ-ಕಾಗದದ ದೋಣಿಯನು....

ನಿಶೆ-ಹಗಲು ಬಳಿ ನಿಂತಿರುವೆ
ಕನಸಿನಿಂದ ನೀ ಹೊರಬರಲು....
ದಿನಾಂತ ಸಮಯಕೆ ಕಾದಿರುವೆ
ಕಲ್ಪನೆಯ ತಾರೆ ಹೊಳೆದಿರಲು....

ಹಾಳೆಯ ನಾವಿಯ ತೇಲಿ ಬಿಡೋಣ
ಸಾಗಲಿ ಅರಸುತ ತೀರವನು....
ಪ್ರೇಮ ತರಂಗವ ಸೃಜಿಸೋಣ
ತಲುಪಲಿ ನಮ್ಮಯ ನಿಲಯವನು....


This poem was inspired by this post. Thanks Indira... :)

Sunday, November 22, 2009

ಜೀವನದ ತತ್ವ -- ಸತ್ವ?

ಎಲ್ಲರ ನೋವ ನಾ ಹಂಚಿಕೊಂಡೆ
ನನ್ನ ಆರೂ ಕೇಳುವರಿಲ್ಲ |
ಆದರೂ ಎಲ್ಲರ ನಾ ಪ್ರೀತಿಸುವೆ
ಎನಗಿಂತ ಮೂಢನು ಇನ್ನಿಲ್ಲ ||

ಪರರ ವರ್ತನೆಗೆ ದುಖಿಯಾಗದಿರು ಮನವೆ
ನಿನ್ನ ಕೆಲಸವ ನೀ ಮಾಡು ||
ನಿರಾಸೆ ಎಂಬುದು ಜೀವನದಲಿ ಸಹಜವೇ
ನಿಶ್ಕಾಮದ ದೃಶ್ಯವ ನೀ ನೋಡು ||
ಕಾಣುವುದು ಸಂಸಾರದಲಿ ಆನಂದದ ಸಾಗರವೇ
ನಿರೀಕ್ಷೆಯ ತೊರೆವ ವರವ ನೀ ಬೇಡು ||

ನಿನ್ನ ಗುಣ-ಲಕ್ಷಣಗಳನು
ಕಾಪಾಡಿಕೊ ಋತು-ಕಾಲಗಳಿ೦ದ |
ಮತ್ತೆ ಸವಿಯಲಾಗುವುದಿಲ್ಲ ಕಂಪು
ಬಾಡಿ ಹೋದ ಹೂವಿನಿಂದ ||

Saturday, November 21, 2009

ಮಾತು

ಹೇಳಬೇಕೆನೆಸುತಿದೆ ಸಾವಿರ ಮಾತು...
ನಿನ್ನ ನೋಡುತಲೆ ಆಗುತಿದೆ ಅವು ನಶ್ವರ ಧಾತು..
ನಂಬಿದ್ದೆ ನಾನು ನಿನ್ನ ಕಳೆದುಕೊಂಡೆನೆಂದು....
ಸಂತಸದಿ ನಲಿದೆನು ನೀನು ಅರ್ಥೈಸಿಕೊಂಡೆ ಎಂದು...
ಮುಂದೆ ನೀನಾಡಿದ ಮಾತುಗಳು...
ಕೊಲ್ಲುವುವು ಇನ್ನು ಹಗಲು ಇರುಳು...

Friday, November 20, 2009

ನಿಯಮಾವಳಿ

ಸುಂದರ ಪುಷ್ಪವ ಅರಸುತ,
ಜೇನಿನ ಸ್ವಾದವ ನೆನೆಯುತ,
ಮಣ್ಣಿನ ಕಂಪನು ಸವಿಯುತ,
ದುಂಬಿಯು ಹಾರಿತು ಕಾಡಿನಲಿ

ಜಾವದ ಮಂಜಿಗೆ ನಡುಗುತ,
ತಣ್ಣನೆ ಗಾಳಿಗೆ ಬಳುಕುತ,
ಸೂರ್ಯನ ರಷ್ಮಿಗೆ ಒಲಿಯುತ,
ಲತೆಯು ಅರಳಿತು ತೋಟದಲಿ

ಹಸಿದಿಹ ದುಂಬಿಯು ಬಂದಾಗ,
ಹೂವಿನ ಕಾಂತಿಯ ಕಂಡಾಗ,
ಮನಸಲಿ ಕಾತರ ನಲಿದಾಗ,
ಸುಮವನು ಅಪ್ಪಿತು ಮೋಡಿಯಲಿ.

ಕುಸುಮದಿ ತುಟಿಯನು ಇರಿಸುತ,
ವೇಗದಿ ರೆಕ್ಕೆಯ ಬಡಿಸುತ,
ಪ್ರೀತಿಯ ಚುಂಬನ ನೀಡುತ,
ಮಧುವನು ಸವಿಯಿತು ಹಿಗ್ಗುತಲಿ.

ಹೊಟ್ಟೆಯು ತುಂಬಿದ ನಂತರ,
ಬೆಳೆಯಿತದೇಕೋ ಅಂತರ,
ಆಯಿತೇ ಪ್ರೀತಿಯು ನಶ್ವರ?
ನುಡಿಯಿತು ಕುಸುಮವು ದುಃಖದಲಿ.

ಪ್ರಕೃತಿ ನಿಯಮದ ಅನುಸಾರ,
ನಡೆಯುತಿಹುದೀ ಸಂಸಾರ,
ಸರಿ-ತಪ್ಪು ನಡುವಿನ ಅಂತರ,
ಅರಿತವನೆ ಜ್ಞಾನಿ - ನೀ ಕಲಿ.

Tuesday, November 10, 2009

rangu-kaavya

ಸಂಜೆಯ ರಾಗಕೆ ಪ್ರೀತಿಯ ಭಾವಕೆ
ಹಕ್ಕಿಯ ತಾಳಕೆ ಬಾನು ರಂಗೇರಿದೆ ||

ಹೂವಿನ ಗಂಧಕೆ ದುಂಬಿಯ ಮುತ್ತಿಗೆ
ಬಳ್ಳಿಯ ತೆಕ್ಕೆಗೆ ಗದ್ದೆ ಸೊಂಪಾಗಿದೆ ||

ಮೇಘದ ಚಿತ್ತಕೆ ನೀರಿನ ಕಾಯಕೆ
ಗಾಳಿಯ ಸ್ಪರ್ಶಕೆ ಜೀವ ಒಂದಾಗಿದೆ ||