Saturday, December 12, 2009

ನಾಂದಿ



ಶಶಿಯಿಲ್ಲದ ಆಗಸದಿ
ಕಾರ್ಮೋಡವು ಒಗ್ಗೂಡಲು |
ಬಿರುಗಾಳಿಯ ಆರ್ಭಟದಿ
ಬಹುತೆರೆಗಳು ಮೇಲೇರಲು |
ಅಪ್ಪಳಿಸಿತು ಉದ್ರೇಕದಿ
ಅವಳ ನೋವ ಅಲೆಗಳು ||


ಅರಸಿಹಳೊ೦ದು ಆಶ್ರಯ
ದೂರದಡದಿ ಕುಳಿತಿರಲು |
ಜೀವನದ ಅನಿಶ್ಚಯ
ಮನಸೆಲ್ಲವ ಕಾಡಿರಲು |
ಭಾವನೆಗಳ ಅಭಿನಯ
ತನ್ನಾತ್ಮವ ಕೊಂದಿರಲು ||


ಆಶಾಛವಿಯ ಕಿರಣಗಳು
ತಾಮಸವ ಕಳೆದಿರಲು |
ಭರವಸೆಯ ತಂಗಾಳಿಯು
ನೆಮ್ಮದಿಯ ತಂದಿರಲು |
ಹಳೆ ದುಃಖವ ಮರೆತಿಹಳು
ಸಬಲೆಯಾಗಿ ನಗುತಿರಲು ||

2 comments:

Unknown said...

:)

ತೇಜಸ್ವಿನಿ ಹೆಗಡೆ said...

ನಿರಾಸೆಯಿಂದ ಆಶಾವಾದಿಯತ್ತ ತಿರುಗುವ ಕವನ ಚೆನ್ನಾಗಿದೆ.