Saturday, January 16, 2010

ಗೊಧೂಳಿಯ ವೇಳೆ --- ಶ್ರಮಣನಿಗೋ-ವೈದಿಕನಿಗೋ?



ಬಾನಂಚಲಿ ಸಾಗಿಹನು ಕೆಂಪು ರವಿ-ತೇಜ |
ಸುಂದರ ಚಿತ್ತಾರವದು ಬಣ್ಣದಾ ಕ್ಷಿತಿಜ ||
ಹಕ್ಕಿಗಳು ವಲಸೆಯಲಿ ಅರಸುತಿಹವು ಉಟಜ |
ಮುಸ್ಸಂಜೆಯ ರಂಗಲ್ಲಿ ಪರಿಸರದ ಧ್ವಜ ||

ಈ ಮಧುರ ದೃಶ್ಯವು ತೋರಿಹುದು ಕ್ಷಣಿಕ |
ಬೆಳಗುತಿದ್ದ ಆಗಸಕೆ ಬಿದ್ದಿದೇ ಯವನಿಕ ||
ಸೌಂದರ್ಯದ ಮಾಯೆಯ ಸೃಷ್ಟಿಸಿ ತನ್ಮೂಲಕ |
ಸೆಳೆದಿಹನು ಚೈತನ್ಯವ ದಿವಾಕರನು ಆವಕ ||

ಮಾಸುತಿಹ ಪರಿಧಿಯಲಿ ಮಂಕಾಗಿದೆ ಕಾಂತಿ |
ಝೇಂಕರಿಸಿಹ ದುಂಬಿಯಲಿ ಕುದುರುತಿದೆ ಕ್ಲಾಂತಿ ||
ಆಯತದ ಛಾಯೆಯಲಿ ಮೂಡುತಿದೆ ಸಂಭ್ರಾಂತಿ |
ತಾಮಸದ ಮುಸುಕಿನಲಿ ಅಳಿದಿದೆ ಮನಶಾಂತಿ ||

ಮೂಡುವನು ಆಗಸದಿ ಹುಣ್ಣಿಮೆಯ ಚಂದಿರ |
ಕತ್ತಲಿನ ಸಾಗರದಿ ಬೆಳದಿಂಗಳ ಭೂಶಿರ ||
ದುಗುಡದ ಚೀತ್ಕಾರದಿ ಶಮನದ ಉದ್ಗಾರ |
ಶಾಂತಿಯಲಿ ಮಲಗಲಿದೆ ಮನಸಿನಾ ಸರೋವರ ||

ಶಶಿಯ ಆಗಮನವು ನೆಮ್ಮದಿಯ ತರಲಿರಲು |
ಸೂರ್ಯನ ಅಗಲಿಕೆಗೆ ಚಿಂತೆಯೇತಕೆ?
ಯಶಸ್ಸಿನ ಹಾದಿಯು ಜೀವನದ ಮುಂದಿರಲು |
ಅಪಜಯದ ಚಿಹ್ನೆಗೆ ಅಳುಕಲೇತಕೆ?

Photo: Courtesy Indira

6 comments:

Unknown said...

thumbha chennagidhe...

ಶಶಿಯ ಆಗಮನವು ನೆಮ್ಮದಿಯ ತರಲಿರಲು |
ಸೂರ್ಯನ ಅಗಲಿಕೆಗೆ ಚಿಂತೆಯೇತಕೆ?

Being content with balance is difficult to achieve, its human to feel so.

Well written.

ಸಾಗರದಾಚೆಯ ಇಂಚರ said...

wow
ತುಂಬಾ ಚೆನ್ನಾಗಿದೆ
ಶಬ್ದಗಳ ಜೋಡಣೆ ಸೂಪರ್

ತೇಜಸ್ವಿನಿ ಹೆಗಡೆ said...

nice poem. Liked it. Keep writing.

ಮನಮುಕ್ತಾ said...

ಸು೦ದರ ಕವನ.

ಚುಕ್ಕಿಚಿತ್ತಾರ said...

chandada kavite...
ಝೇಂಕರಿಸಿಹ ದುಂಬಿಯಲಿ ಕುದುರುತಿದೆ ಕ್ಲಾಂತಿ....
artha aagalilla....?

Sri said...

@guru: tumba dhanyavdagaLu... :)
@tejaswini: khanDita.. thanks..

@chukkichittara: klanti andre nirasakti... sooryana kaanti kaDimeyadante dumbiyallidda aasaktiyu shamanavaguttide emba artha...