Wednesday, August 5, 2009

ಪಶ್ಚಾತ್ತಾಪ


ಕಯ್ಯಲಿ ಚಕಮಕಿಸುತಿಹ ಚಾಕು - ಆಗಿಹುದು ಹರಿತ |
ಮನದಲಿ ಬಡಬಡಿಸುತಿಹ ಇಚ್ಛೆ - ಭರವಾದ ಇರಿತ ||

ಈ ಪರಿಯ ಕ್ರೌರ್ಯವ ಎಸಗುವುದು - ನನ್ನ ಇಂಗಿತ |
ಸಂಚಿನ ಅರಿವಿಲ್ಲದೆ ನೀ ಮಲಗಿರುವೆ - ಚಿಂತಾ-ರಹಿತ ||

ಒಂದು ಕಯ್ಯಲಿ ಹಿಡಿದೆನು ನಿನ್ನ ಶರೀರವ |
ತಡೆಯಲಾರದೆ ಹೋದೆನು ಮನದ ಉದ್ವೇಗವ ||

ತ್ವರಿತದಲಿ ಇರಿದೆನು ನಿನ್ನ ಕೋಮಲ ಹೊಟ್ಟೆಯನು |
ಚಿಮ್ಮಿತು ನಿನ್ನ ನೆತ್ತರು; ನಡುಗಿಸಿತು ನನ್ನ ಕೈಗಳನು ||

ಜೀವದ್ರವವು ಹರಿಯುವುದ ನೋಡಿ ಅದೇಕೋ ಅರಿಯೆ |
ಚಿತ್ತದಿ ಹೊರಹೊಮ್ಮಿತು ಯೋಚನೆ - ನಾ ಮಾಡಿದ್ದು ಸರಿಯೆ? ||

ತಡೆಯಲಾರದೆ ಮನದ ದುಗುಡದ ನಿರ್ಭರ |
ಹರಿಯಿತು ಕಣ್ಣೀರ ಧಾರೆಯ ಮಹಾಪೂರ ||

ಕಂಬನಿ ಇಟ್ಟರೂ, ಇದರಿಂದ ತಗುಲಿತೇ ನನಗೆ ಪಾಪ |
ಅಥವಾ ಮಾಡಿಹ ಕೃತ್ಯಕ್ಕೆ ಇದೇ ದೇವರಿಟ್ಟ ಶಾಪ? ||

ಪಶ್ಚಾತ್ತಾಪದಿ ಕ್ಷಮೆ ಯಾಚಿಸುವೆ - ನನ್ನೀ ನೀರಸ ಸ್ಥಿತಿಯಲ್ಲಿ |
ಹೇ ಸ್ವಾದ-ಭೋಗದ ರಾಣಿ - ನನ್ನ ಮೆಚ್ಚಿನ ಈರುಳ್ಳಿ....... ||


ಈರುಳ್ಳಿ ಹೆಚ್ಚುವಾಗ ನಿಮಗೂ ಈ ರೀತಿ ಅನುಭವ ಆಗಿದ್ದಲ್ಲಿ, ನನಗೆ ಬರೆದು ತಿಳಿಸಿ....... :)

7 comments:

vini said...

Baayalli Neeru !
;)

loop said...

LOL

Sachin Shanbhogue said...

Ree reee reee.. EeruLLi anno vonde padadalli yella suspense haaLu maDidri neevu che..

Aadhroo..nimma samarthya torsidri.. Am sure I wil hear abt ur Kannada writings in a few years. :-)

V said...

'ಜೀವದ್ರವವು ಹರಿಯುವುದ ನೋಡಿ ಅದೇಕೋ ಅರಿಯೆ'
- ಆಹಾ!!! ನನಗೆ ತುಂಬ ಇಷ್ಟವಾದ ಸಾಲು
buildup ಸಕ್ಕತ್-ಆಗಿ ಇತ್ತು :)
ನಿನ್ನ ಕಲ್ಪನೆ ತುಂಬ ಚೆನ್ನಾಗಿದೆ .

Karthik[:)] said...

sri
sooper build up kano
kudos :-)

Unknown said...

sooooper suspense kavana :D

Unknown said...

sooper aagide ee padya, yellarigu ide anubhva aagatte ansatte, eerulli hecchuvaga..